ಪೋಸ್ಟ್‌ಗಳು

ಮಾರ್ಚ್ 26, 2010 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಹಾಡುವಳ್ಳಿಯಲ್ಲಿ ಸಾಂಕ್ರಮಿಕ, ರೋಗ ಓರ್ವ ಮಹಿಳೆ ಸಾವು. ಜನರಲ್ಲಿ ಮನದಲ್ಲಿ ಭೂತದ ಭ್ರಮೆ

ಇಮೇಜ್
ಹಾಡುವಳ್ಳಿಯಲ್ಲಿ ಸಾಂಕ್ರಮಿಕ, ರೋಗ ಓರ್ವ ಮಹಿಳೆ ಸಾವು. ಜನರ ಮನದಲ್ಲಿ ಭೂತದ ಭ್ರಮೆ ಮುಹಮ್ಮದ್ ರಝಾ ಮಾನ್ವಿ. ಭಟ್ಕಳ:೨೬, ಭಟ್ಕಳ ನಗರದಿಂದ ೨೦ಕಿ.ಮಿ ದೂರದಲ್ಲಿರುವ ಹಿಂದುಳಿದ ಪ್ರದೇಶವೆಂದೇ ಗುರುತಿಸಲ್ಪಡುವ ಹಾಡುವಳ್ಳಿಯ ಕೆಲವು ಪ್ರದೇಶಗಳಲ್ಲಿ ಯಾವುದೋ ಸಾಂಕ್ರಾಮಿಕ ರೋಗವು ಮನೆಮಾಡಿಕೊಂಡಿದ್ದು ಅದೀಗ ಉಲ್ಭಣಗೊಂಡ ಹಿನ್ನೆಲೆಯಲ್ಲಿ ಓರ್ವ ಮಹಿಳೆ ಮೃತಪಟ್ಟಿದ್ದು ಅಲ್ಲಿನ ಜನತೆಯಲ್ಲಿ ದಿಗ್ಭ್ರಮೆಯನ್ನು ಮೂಡಿಸಿದೆ. ಆತಂಕಿತ ಗ್ರಾಮೀಣ ಜನತೆ ಇದೊಂದು ಭೂತ (ಗಾಳಿ) ಎಂದು ಭಾವಿಸಿ ಮಾಟ ಮಂತ್ರ ಅಥವ ಮತ್ಯಾವುದೋ ಬಾಬಗಳಿಗೆ ಮೊರೆಹೋಗಿರುವ ಸಂಗತಿ ಬೆಳಕಿಗೆ ಬಂದಿದೆ. ಕಳೆದ ಎರಡು ತಿಂಗಳ ಹಿಂದೆ ಹಾಡುವಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಹಳ್ಯಾಣಿ, ಮೂರ‍್ಕೋಡಿ,ತೋಟದಮಕ್ಕಿ ಮುಂತಾದ ಪ್ರದೇಶಗಳಲ್ಲಿ ಸಾಂಕ್ರಾಮಿಕ ರೋಗಗಳು ಕಾಣಿಸಿಕೊಂಡಿದೆ ಎನ್ನಲಾಗಿದ್ದು ಅದೀಗ ಬಹಿರಂಗಗೊಂಡಿದ್ದು ಜನರ ಆತಂಕಕ್ಕೆ ಕಾರಣವಾಗಿದೆ. ಸಾಂಕ್ರಾಮಿಕ ರೋಗದಿಂದಲೋ ಅಥವಾ ಇನ್ನಿತರ ಯಾವುದೋ ಕಾರಣದಿಂದಲೋ ಓರ್ವ ಮಹಿಳೆ ಇಲ್ಲಿ ಸಾವನ್ನಪ್ಪಿರುವುದು ಜನರಲ್ಲಿ ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಮೃತ ಮಹಿಳೆ ಮಾಸ್ತಮ್ಮ ನಾರಾಯಣ ನಾಯ್ಕ (೩೫) ಕಳೆದ ಕೆಲವು ದಿನಗಳಿಂದ ತೀವ್ರತರವಾದ ಜ್ವರದಿಂದ ಬಳಲುತ್ತಿದ್ದಳು ಎನ್ನಲಾಗಿದೆ. ಆಕೆಯನ್ನು ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನೂ ಕೂಡ ನೀಡಲಾಗಿತ್ತು. ಆಕೆಯನ್ನು ಬದುಕಿಸಲು ಕುಟುಂಬದವರು ಹಳ್ಳಿವೈದ್ಯರ ಮೊರೆ ಹೋಗಿದ್ದು ಅವ...