ಹೇಳಿರಿ ಅಲ್ಲಾಹನು ಏಕೈಕನು ಅವನಿಗೆ ಸರಿಸಮಾರು ಯಾರು ಇಲ್ಲ. ಅವನಿಗೆ ನಿದ್ದೆಯಾಗಲಿ ತೂಕಡಿಕೆಯಾಗಲಿ ಬಾಧಿಸುವುದಿಲ್ಲ.
ಪೋಸ್ಟ್ಗಳು
ಮಾರ್ಚ್ 29, 2010 ರಿಂದ ಪೋಸ್ಟ್ಗಳನ್ನು ತೋರಿಸುತ್ತಿದೆ
ಭಟ್ಕಳ:ವಿದ್ಯಾರ್ಥಿಗಳಿಗೆ ತಲೆಬಿಸಿಯಾದ ವಿದ್ಯುತ್ ಕಡಿತ ಫಲಿತಾಂಶದ ಮೇಲೆ ಪರಿಣಾಮ ಬೀರುವ ಸಾಧ್ಯತೆ.
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಭಟ್ಕಳ:ವಿದ್ಯಾರ್ಥಿಗಳಿಗೆ ತಲೆಬಿಸಿಯಾದ ವಿದ್ಯುತ್ ಕಡಿತ ಫಲಿತಾಂಶದ ಮೇಲೆ ಪರಿಣಾಮ ಬೀರುವ ಸಾಧ್ಯತೆ . ಭಟ್ಕಳ:೨೯, ಭಟ್ಕಳದಲ್ಲಿ ವಿದ್ಯುತ್ ಕಣ್ಣು ಮುಚ್ಚಾಲೆಗೆ ಬೇಸತ್ತ ವಿದ್ಯಾರ್ಥಿ ಸಂಘಟನೆಗೆ ಎಸ್.ಐ.ಓ ಭಟ್ಕಳ ತಾಲೂಕಿನಾದ್ಯಂತ ಪರೀಕ್ಷೆಗಳು ಮುಗಿಯುವವರೆಗೂ ವಿದ್ಯುತ್ ಕಡಿತಗೊಳಿಸದಿರುವಂತೆ ಇಲ್ಲಿನ ಸಹಾಯಕ ಕಮಿಷನರ್ ಹಾಗೂ ಹೆಸ್ಕಾಮ್ ಆಧಿಕಾರಿಗಳಿಗೆ ಮನವಿ ಅರ್ಪಿಸಿದ ಬೆನ್ನ ಹಿಂದೆಯೆ ಹೆಸ್ಕಾಂ ಕಂಪನಿಯು ವಿದ್ಯುತ್ ಕಡಿತವನ್ನು ದ್ವಿಗುಣಗೊಳಿಸಿದ್ದು ಪರೀಕ್ಷೆಯ ಸಮಯದಲ್ಲಿ ಈ ವಿದ್ಯುತ್ ಕಡಿತವು ವಿದ್ಯಾರ್ಥಿಗಳಿಗೆ ಭಾರಿ ಬೆಲೆಯನ್ನು ತೆರುವಂತೆ ಮಾಡಿದೆ. ಸಂಜೆ ಹಾಗೂ ಬೆಳಗಿನ ಸಮಯ ಅರ್ದಗಂಟೆ ವಿದ್ಯುತ್ ಕಡಿತಗೊಳಿಸುತ್ತಿರುವ ಇಲಾಖೆಯು ಈಗ ಅದನ್ನು ದ್ವಿಗುಣಗೊಳಿಸಿ ತನ್ನ ವ್ಯಾಪ್ತಿಗೆ ಬರುವ ಎಲ್ಲಾ ತಾಲೂಕುಗಳಿಗೆ ಫರ್ಮಾನು ಜಾರಿಗೊಳಿಸಿದ್ದು ಅದರಂತೆ ಮುರುಡೇಶ್ವರದಲ್ಲಿ ಬೆಳಿಗ್ಗೆ ೬ ಗಂಟೆಯಿಂದ ೮ ಗಂಟೆವರೆಗೆ, ಸಂಜೆ ೧ರಿಂದ ೨ ಹಾಗೂ ರಾತ್ರಿ ೭ರಿಂದ ೮ ಗಂಟೆಯವರೆಗೆ, ಶಿರಾಲಿ ವ್ಯಾಪ್ತಿಯಲ್ಲಿ ಬೆಳಿಗ್ಗೆ ೬ರಿಂದ ೮, ಸಂಜೆ ೧೨ ರಿಂದ ೧, ಹಾಗೂ ರಾತ್ರಿ ೬ ರಿಂದ ೭ ಗಂಟೆಯವರೆಗೆ, ಅಳ್ವೆಕೋಡಿ ಭಾಗದಲ್ಲಿ ಬೆಳಿಗ್ಗೆ ೮ರಿಂದ ೧೦, ಸಂಜೆ೨ರಿಂದ೩ ಹಾಗೂ ರಾತ್ರಿ ೮ ರಿಂದ ೯ ಗಂಟೆಯವರೆಗೆ, ಕೊಪ್ಪ ವ್ಯಾಪ್ತಿಯಲ್ಲಿ ಬೆಳಿಗ್ಗೆ ೬ರಿಂದ ೧೨, ಸಾಯಂಕಾಲ ೩ರಿಂದ ೬, ರಾತ್ರಿ ೧೧ ರಿಂದ ೩ ಗಂಟೆಯವರೆಗೆ, ಭಟ್ಕಳ ನಗರವನ್ನು ಎರಡು ವಿಭಾಗವನ್ನಾಗಿ ಮಾಡಿದ್ದು...