ಹೇಳಿರಿ ಅಲ್ಲಾಹನು ಏಕೈಕನು ಅವನಿಗೆ ಸರಿಸಮಾರು ಯಾರು ಇಲ್ಲ. ಅವನಿಗೆ ನಿದ್ದೆಯಾಗಲಿ ತೂಕಡಿಕೆಯಾಗಲಿ ಬಾಧಿಸುವುದಿಲ್ಲ.
‘ಭಟ್ಕಳ್’ ಸಹೋದರರ ಸುತ್ತ ಗಿರಕಿ ಹೊಡೆಯುತ್ತಿರುವ ಮಾಧ್ಯಮಗಳು
‘ಭಟ್ಕಳ್’ ಸಹೋದರರ ಸುತ್ತ ಗಿರಕಿ ಹೊಡೆಯುತ್ತಿರುವ ಮಾಧ್ಯಮಗಳು ಮತ್ತೊಮ್ಮೆ ಕರಾವಳಿಯ ಈ ಪುಟ್ಟ ಶಾಂತಿಯ ನಗರ ಭಟ್ಕಳ ರಾಷ್ಟ್ರಮಟ್ಟದಲ್ಲಿ ಸುದ್ದಿಯಲ್ಲಿದೆ. ದೇಶದ ಯಾವ ಮೂಲೆಯಲ್ಲಿ ಏನಾದರೂ ಅನಾಹುತ ಜರಗಿದರೆ ಅದಕ್ಕೆ ಸುತ್ತಿಬಳಸಿ ಭಟ್ಕಳ್ ಸಹೋದರರ ಹೆಸರನ್ನು ಮಾಧ್ಯಮಗಳಲ್ಲಿ ತೇಲಿ ಬಿಡುವುದರ ಮೂಲಕ ಪೊಲೀಸರು ಭಟ್ಕಳದ ಹೆಸರನ್ನು ಹಾಳುಮಾಡುವ ತವಕದಲ್ಲಿರುತ್ತಾರೆ. ಎಲ್ಲೇ ಸ್ಪೋಟಗಳು ನಡೆಯಲಿ ಸ್ಪೋಟ ನಡೆದ ಹತ್ತು ನಿಮಿಷದಲ್ಲೆ ‘ಭಟ್ಕಳ್’ ಹೆಸರು ಯಾವುದೇ ಅಡೆತಡೆಯಿಲ್ಲದೆ ರಾಷ್ಟ್ರೀಯ ಅಂತರಾಷ್ಟ್ರೀಯ ಟಿವಿ ಪರದೆಗಳ ಮೇಲೆ ಹೈಲೈಟ್ ಆಗುತ್ತೆ. ಹಾಗೆಯೆ ಪೊಲೀಸ್ ಅಧಿಕಾರಿಗಳ ಹಿಡಿತವಿಲ್ಲದ ನಾಲಗೆಯ ಮೆಲೆ ಹರಿದಾಡುತ್ತದೆ. ಅಲ್ಲಿಗೆ ಮುಗಿಯಿತು ಅಸಲಿ ಭಯೋತ್ಪಾದಕರು ಪರದೆಯಿಂದ ಹಿಂದಕ್ಕೆ ಸರಿಯುತ್ತಾರೆ. ಒಂದೆರಡು ದಿನಗಳಲ್ಲಿ ಘಟನೆಯಲ್ಲಿ ಉಂಟಾದ ಸಾವು ನೋವುಗಳು ಸಂತೃಸ್ತರ ಆಕ್ರಂದನಗಳು ಮರೆಯಲಾರಂಭವಾಗುತ್ತವೆ. ಅಲ್ಲಿಗೆ ಪೊಲೀಸ್ ಅಧಿಕಾರಿಗಳ ಕೆಲಸವೂ ಮುಗಿಯುತ್ತದೆ. ಮತ್ತೆ ಯಾವುದದಾರೂ ದುರ್ಘಟನೆಗಳು ನಡೆದಲ್ಲಿ ಭಟ್ಕಳ್ ಸಹೋದರರು ನೆನಪಾಗುತ್ತಾರೆ. ಹೈದರಾಬಾದ್ ನ ದಿಲ್ ಸುಖ್ ನಗರದ ಸ್ಪೋಟದಲ್ಲೂ ಆಗಿದ್ದು ಇಷ್ಟೇ ತಾನೆ. ಸ್ಪೋಟದ ಕೆಲವೆ ಕ್ಷಣದಲ್ಲಿ ಟಿವಿ ಪರದೆ ಮೇಲೆ ರಿಯಾಝ್ ಹಾಗೂ ಇಖ್ಬಾಲ್ ಭಟ್ಕಳ್ ನ ಹೆಸರು ರಾರಾಜಿಸಿದ್ದು. ಇಷ್ಟಕ್ಕೂ ದೇಶದ ಯಾವೆಲ್ಲ ಸ್ಪೋಟಗಳು ನಡೆದವು ಆ ಎಲ್ಲ ಸ್ಪೋಟಗಳಲ್ಲೂ ರಿಯಾಜ್ ಹಾಗೂ ಇಖ್ಬಾಲ್ ನ ಕ...
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ