ಪರೇಶ್ ಮೇಸ್ತಾನ ಸಹಜ ಸಾವನ್ನು ಕೊಲೆ ಎಂದು ಬಿಂಬಿಸಿದ್ದ ಸಂಸದ, ಶಾಸಕರು ರಾಜಿನಾಮೆ ನೀಡಲಿ-ಐವಾನ್ ಡಿ’ಸೋಜಾ
ಪರೇಶ್ ಮೇಸ್ತಾನ ಸಹಜ ಸಾವನ್ನು ಕೊಲೆ ಎಂದು ಬಿಂಬಿಸಿದ್ದ ಸಂಸದ, ಶಾಸಕರು ರಾಜಿನಾಮೆ ನೀಡಲಿ-ಐವಾನ್ ಡಿ’ಸೋಜಾ
![]() |
| ಭಟ್ಕಳದ ಬ್ಲಾಕ್ ಕಾಂಗ್ರೇಸ್ ಕಚೇರಿಯಲ್ಲಿ ಮಂಗಳವಾರ ಜರಗಿದ ಪತ್ರಿಕಾಗೋಷ್ಟಿಯಲ್ಲಿಕೆ.ಪಿ.ಸಿ.ಸಿ. ಉಪಾಧ್ಯಕ್ಷ ಐವಾನ್ ಡಿಸೋಜ ಮಾತನಾಡಿದರು. |
ಭಟ್ಕಳ : ಹೊನ್ನಾವರದ ಪರೇಶ ಮೇಸ್ತಾ ಅವರ ಸಹಜ ಸಾವಿನ ಪ್ರಕರಣವನ್ನು ಕೊಲೆ ಎಂದು ಬಿಂಬಿಸಿ ರಾಜಕೀಯ ಲಾಭ ಪಡೆದು ಚುನಾವಣೆಯಲ್ಲಿ ಆರಿಸಿ ಬಂದಿದ್ದ ಬಿ.ಜೆ.ಪಿ. ಶಾಸಕರು, ಸಂಸದರು ತಕ್ಷಣ ರಾಜೀನಾಮೆ ನೀಡಬೇಕು ಎಂದು ಕೆ.ಪಿ.ಸಿ.ಸಿ. ಉಪಾಧ್ಯಕ್ಷ ಐವಾನ್ ಡಿಸೋಜ ಅವರು ಆಗ್ರಹಿಸಿದರು.
ನಿಮ್ಮದೇ ಸರಕಾರ ಕೇಂದ್ರದಲ್ಲಿದೆ, ನಿಮ್ಮದೇ ಸರಕಾರ ರಾಜ್ಯದಲ್ಲಿದೆ ಡಬ್ಬಲ್ ಇಂಜಿನ್ ಸರಕಾರ ಎನ್ನುವ ನೀವು ನಿಮ್ಮದೇ ಅವಧಿಯಲ್ಲಿ ಸಿಬಿಐ ನೀಡಿದ ವರದಿಯನ್ನು ಒಪ್ಪುತ್ತಿಲ್ಲ ಎನ್ನುತ್ತಿದ್ದೀರಿ. ನಿಮ್ಮನ್ನು ನೋಡಿ ಜನ ನಗುತ್ತಿದ್ದಾರೆ. ಕಾನೂನಿನ ಅರಿವೇ ಇಲ್ಲದಂತಹ ನಿಮ್ಮ ಪು:ನ ಪರಿಶೀಲನೆಯ ನಾಟಕ ಸಾಕಾಗಿ ಹೋಗಿದೆ ಎಂದ ಅವರು ಜನರಲ್ಲಿ ಸುಳ್ಳನ್ನೇ ಸತ್ಯ ಎಂದು ನಂಬಿಸಿ ಮೋಸದಿಂದ ಆಯ್ಕೆಯಾದ ಬಿ.ಜೆ.ಪಿ. ಶಾಸಕ ಸುನಿಲ್ ನಾಯ್ಕ, ದಿನಕರ ಶೆಟ್ಟಿ, ರೂಪಾಲಿ ನಾಯ್ಕ, ಸಂಸದ ಅನಂತಕುಮಾರ ಹೆಗಡೆ ರಾಜೀನಾಮೆ ನೀಡಲಿ ಎಂದೂ ಅವರು ಆಗ್ರಹಿಸಿದರು.
ಮುಂದಿನ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಕಾಂಗ್ರೆಸ್ ಪರೇಶ ಮೇಸ್ತನ ಸಾವಿನ ವರದಿಯನ್ನು ಬಿಂಬಿಸುತ್ತಿದೆಯೇ ಎನ್ನುವ ವರದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು ಪರೇಶ ಮೇಸ್ತನ ಸಾವಿನ ವರದಿಯು ಚುನಾವಣೆಗೆ ಮೊದಲು ಬಂದಿದ್ದರಿAದ ಬಿ.ಜೆ.ಪಿ. ಪಕ್ಷಕ್ಕೆ ದೊಡ್ಡ ಆಘಾತವಾಗಿದೆ. ಈ ಬಾರಿ ಚುನಾವಣೆಗೂ ಮುನ್ನವೇ ಜನರಿಗೆ ಸತ್ಯದ ಅರಿವಾಗಿದ್ದರಿಂದ ಬಿ.ಜೆ.ಪಿ.ಗೆ ಇದು ಮುಳುವಾಗಲಿದೆ ಎಂದರು.
ನ.೨೪ ರಂದು ಬೃಹತ್ ಸಮಾವೇಶ: ನ.೨೪ರಂದು ಕುಮಟಾದ ಮಣಕಿ ಮೈದಾನದಲ್ಲಿ ಬಿ.ಜೆ.ಪಿ. ದ್ವಂದ್ವ ನೀತಿಯನ್ನು ಜನತೆಗೆೆ ತಿಳಿಸಲು ಹಾಗೂ ರಾಜ್ಯ-ಕೇಂದ್ರ ಸರಕಾರಗಳ ವೈಫಲ್ಯವನ್ನು ಜನರ ಮುಂದಿಡಲು ಬೃಹತ್ ಸಮಾವೇಶ ಹಮ್ಮಿಕೊಳ್ಳಳಾಗಿದ್ದು ರಾಜ್ಯ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯ ಮಂತ್ರಿ ಸಿದ್ಧರಾಮಯ್ಯ, ರಾಜ್ಯ ಉಸ್ತುವಾರಿಗಳು, ಶಾಸಕರು, ಸಂಸದರು ಸೇರಿದಂತೆ ಪ್ರಮುಖರು ಭಾಗವಹಿಸಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ ಎಂ. ನಾಯ್ಕ, ಮಾಜಿ ಶಾಸಕ ಜೆ.ಡಿ. ನಾಯ್ಕ, ಭಟ್ಕಳ ಪುರಸಭೆ ಅಧ್ಯಕ್ಷ ಪರ್ವೇಜ್ ಕಾಶಿಮಜಿ, ಟಿ.ಡಿ.ನಾಯ್ಕ, ಸತೀಶ ನಾಯ್ಕ, ಸಂತೋಷ ನಾಯ್ಕ, ಖೈಸರ್ ಮೊಹತೆಶಂ, ಸುಲೇಮಾನ್ ಸಾಬ್, ಮಹಾಬಲೇಶ್ವರ ನಾಯ್ಕ, ನಾರಾಯಣ ನಾಯ್ಕ, ಮಂಜು ನಾಯ್ಕ, ಗಣಪತಿ ನಾಯ್ಕ ಜಾಲಿ, ಮಹೇಶ ನಾಯ್ಕ, ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ